ಉಪನ್ಯಾಸಕರ ವಿವರಗಳು ಹಾಗು ಸಂಕ್ಷಿಪ್ತ ಪರಿಚಯ?
ದತ್ತಾತ್ರೇಯ ಸುಬ್ರಹ್ಮಣ್ಯ
ನ್ಯೂಯಾರ್ಕ್ನ ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಕಾನೂನು ಪದವಿಯ ವ್ಯಾಸಂಗವನ್ನು ಯಶಸ್ವಿಯಾಗಿ ಮುಗಿಸಿ, ಬೆಂಗಳೂರಿನ ಕ್ರೈಸ್ಟ್ ಕಾಲೇಜ್ ಆಫ್ ಲಾದಲ್ಲಿ (ಕಾನೂನು ಕಾಲೇಜು) ಪ್ರಾಧ್ಯಾಪಕ ವೃತ್ತಿಗೆ ರಾಜಿನಾಮೆ ನೀಡಿ ಈಗ ಅನೇಕ ಸರ್ಕಾರೇತರ ಸಂಸ್ಥೆಗಳಿಗೆ ತಮ್ಮ ಸಮಾಲೋಚನೆಯನ್ನು ನೀಡುತ್ತಿರುವ ದತ್ತಾತ್ರೇಯ ಶೈಕ್ಷಣಿಕ ವಲಯದಲ್ಲಿ ಸಂಶೋಧನೆಯಲ್ಲಿ ನುರಿತವರು. ಸಾಹಿತ್ಯವನ್ನು, ಸಿನಿಮಾವನ್ನು ಇವರು ಗ್ರಹಿಸುವ ರೀತಿಯೇ ವಿಭಿನ್ನವಾದುದು. ಸಾಮಾಜಿಕ-ರಾಜಕೀಯ-ಸಾಂಸ್ಕೃತಿಕ ಆಯಾಮಗಳನ್ನು ಒರೆಗೆ ಹಚ್ಚಿ ನೋಡುವ ಇವರು, ‘ಪರ್ಯಾಯ ಸಿನಿಮಾಕ್ಕೆ - ಸಾಂಸ್ಕೃತಿಕ ಆಯಾಮ’ ಒದಗಿಸಿ ಮಾತನಾಡಲಿದ್ದಾರೆ.
ವಿ ಬಿ ತಾರಕೇಶ್ವರ್
ಎಂಎ, ಎಂಫಿಲ್, ಪಿಎಚ್ಡಿ ಮುಗಿಸಿರುವ ತಾರಕೇಶ್ವರ್ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಪಕಾರಾಗಿದ್ದಾರೆ. ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳಲ್ಲಿ ಸುಪರಿಚಿತವಾಗಿರುವ ತಾರಕೇಶ್ವರ್ರ ಹೆಸರು ಹೇಗೆ ಪ್ರಮುಖವಾಗಿದೆಯೋ, ಅದೇ ರೀತಿ ಸಂಶೋಧನ ಬರವಣಿಗೆ, ಅನುವಾದದಲ್ಲಿಯೂ ದುಡಿದಿದ್ದಾರೆ. ಅತ್ಯಂತ ನಿಷ್ಠುರವಾದ ನಿಲುವುಗಳಿಗೆ ತಾರಕೇಶ್ವರ್ ತಮ್ಮ ಆಪ್ತವಲಯದಲ್ಲಿ ಹೆಸರಾಂತರೂ ಆಗಿರುವುದರಿಂದ ಗಂಭೀರ ಹಾಗೆಯೇ ನಿಷ್ಠುರವಾದ ನಿಲುವುಗಳನ್ನು ತಾರಕೇಶ್ವರ್ರಿಂದ ನಿರೀಕ್ಷಿಸಬಹುದು. ‘ನನ್ನ ಸಂದರ್ಭದಲ್ಲಿ ಪರ್ಯಾಯ ಸಿನಿಮಾ-ಘಟಶ್ರಾದ್ಧ ಕುರಿತಂತೆ ಒಂದು ಟಿಪ್ಪಣಿ’ ಎಂದೆನ್ನುವ ವಿಷಯವನ್ನು ತೆಗೆದುಕೊಂಡು ತಾರಕೇಶ್ವರ್ ಮಾತನಾಡಲಿದ್ದಾರೆ.
ರಘುನಾಥ ಚ ಹ
ಸಾಹಿತ್ಯದ ಸಂವೇದನೆಯ ಮೂಲಕ ಚಿತ್ರವನ್ನು ಗ್ರಹಿಸುವ ರಘುನಾಥ್ ಪತ್ರಿಕೆಗಳಲ್ಲಿ ಬರುವ, ಆ ಕ್ಷಣದ ವಿಮರ್ಶಕರಲ್ಲಿ ಪ್ರತ್ಯೇಕವಾಗಿ ನಿಲ್ಲುವ ಹೆಸರು, ಇವರೊಂದಿಗೆ ವಿಶಾಕ ಹಾಗು ಸಂದೀಪ ನಾಯಕರೂ ಇದ್ದಾರೆ. ಹೊಸ ಪೀಳಿಗೆಯ ನಿರ್ದಾಕ್ಷಿಣ್ಯವಾದ ನಿಲುವುಗಳು, ಗುಣಮಟ್ಟಕ್ಕೆ ಮಾನ್ಯತೆ ಮುಂತಾದ ಸಂಧರ್ಭೋಚಿತವಾದ ನಿಲುವುಗಳು ಶ್ಲಾಘನೀಯ/ಈ ಕ್ಷಣದ ಅಗತ್ಯ ಕೂಡ. ರಘುನಾಥ್ ಬರಿಯ ಸಿನಿ ವಿಮರ್ಶಕರು ಮಾತ್ರವಲ್ಲ, ಒಳ್ಳೆಯ ಸೃಜನಶೀಲ ಲೇಖಕ ಕೂಡ. ಇವರ ಸಣ್ಣಕತೆಯ ಸಂಕಲನವೊಂದು ಪ್ರಕಟವಾಗಿದೆ. ‘ನನ್ನ ಸಂದರ್ಭದಲ್ಲಿ ಪರ್ಯಾಯ ಸಿನಿಮಾ’ ದ ಪರಿಧಿಯೊಳಗೆ ಇವರ ಮಾತುಗಳು ಇರಲಿವೆ.
ಡೇವಿಡ್ ಬಾಂಡ್
ಮೂಲತ ಫ್ರಾನ್ಸಿನವರು. ಸದ್ಯಕ್ಕೆ ಕರ್ನಾಟಕದಲ್ಲಿ ನೆಲೆ ಕಂಡುಕೊಂಡು ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಫ್ರೆಂಚ್ ಕಲಿಸಿಕೊಡುತ್ತಿದ್ದಾರೆ. ಏಳು ವರ್ಷಗಳಿಂದ ಕನ್ನಡ ಚಿತ್ರಗಳನ್ನು ಸತತವಾಗಿ ಅಧ್ಯಯನ ಪೂರ್ವಕವಾಗಿ ನೋಡಿಕೊಂಡು ಬರುತ್ತಿರುವ ದೇವಿಡ್ ಬಾಂಡ್ ಕನ್ನಡ ಚಿತ್ರಗಳನ್ನು ತೌಲನಿಕವಾಗಿ ಮಾತನಾಡಬಲ್ಲರು. ಇಲ್ಲೂ ಸಹ ಅವರು ಇದನ್ನೇ ಮಾಡಲಿದ್ದಾರೆ.
ಕೆ ಎಚ್ ಸಾವಿತ್ರಿ
ಬಿ ಎಸ್ಸಿ ಪದವಿಧರೆಯಾದ ಸಾವಿತ್ರಿಯವರು ಪತ್ರಿಕೋದ್ಯಮದಲ್ಲಿ ತಮ್ಮ ೨೩ ವರ್ಷಗಳ ಸುದೀರ್ಘ ಅವಧಿ-ಅನುಭವದಲ್ಲಿ ಅನೇಕ ಪ್ರಥಮಗಳನ್ನು ಸಾಧಿಸಿದವರು. ಕರ್ಮವೀರ ವಾರಪತ್ರಿಕೆಯ ಸ್ಥಾನಿಕ ಸಂಪಾದಕಿಯಾಗಿ ಸೇವೆ ಸಲ್ಲಿಸಿ, ಸದ್ಯ ಚಿತ್ರಸೌರಭ ಹಾಗು ಸಿಂಧೂರ ಪುರವಣಿಗಳನ್ನು ಸಂಯುಕ್ತಕರ್ನಾಟಕದಲ್ಲಿ ನಿರ್ವಹಿಸುತ್ತಿದ್ದಾರೆ. ಕರ್ನಾಟಕ ಮಾಧ್ಯಮ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರಾದ ಸಾವಿತ್ರಿ ’ಗಿರೀಶ್ ಕಾಸರವಳ್ಳಿಯವರ ಚಿತ್ರಗಳಲ್ಲಿ ಮಹಿಳೆಯ ಪಾತ್ರಗಳು ಕುರಿತು ಮಾತನಾಡಲಿದ್ದಾರೆ.
ಮಮತಾ ಸಾಗರ್
ಕನ್ನಡದ ಅತ್ಯುತ್ತಮ ಕವನಗಳನ್ನು ಹೆಕ್ಕಬೇಕಾದಾಗ ಮಮತಾರ ಹೆಸರನ್ನು ಬದಿಗೊತ್ತಲಾಗದಂತೆ, ಕಾವ್ಯರಚನೆಯ ತಮ್ಮ ಅಸಲಿ ಕಸುಬಿನಲ್ಲಿ ಮಹಿಳೆಯ ಸಂವೇದನೆಯನ್ನು ಸಶಕ್ತವಾಗಿ ಬಿಂಬಿಸಿರುವ ಮಮತಾ ಸಾಗರ್ ಕನ್ನಡದ ಅತ್ಯುತ್ತಮ ಕವಿಯತ್ರಿಯಾಗಿದ್ದಾರೆ. ಹವಾನ, ಕ್ಯೂಬ, ದಕ್ಷಿಣ ಆಫ್ರಿಕ ದೇಶಗಳಲ್ಲಿ ನಡೆದ ಕಾವ್ಯರಚನೆಯ ಶಿಬಿರಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ಮಮತಾ, ಸದ್ಯಕ್ಕೆ ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಕಾರ್ಯನಿರತವಾಗಿದ್ದಾರೆ. ಕಾಸರವಳ್ಳಿಯವರ ‘ಘಟಶ್ರಾದ್ಧ’ ಚಿತ್ರದಲ್ಲಿ ಮಹಿಳೆಯ ಪಾತ್ರ ಕುರಿತಂತೆ ಇವರ ಚಿಂತನೆ ನಮ್ಮನ್ನು ಬೇರೆಯದೇ ದಿಕ್ಕಿಗೆ ತೆಗೆದುಕೊಂಡು ಹೋಗಬಲ್ಲದು ಎನ್ನುವ ಭರವಸೆ ಇದೆ.
ಉದ್ಘಾಟಕರು: ತುಮಕೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ಓ ಅನಂತರಾಮಯ್ಯ.
ಮುಖ್ಯ ಅತಿಥಿ: ತುಮಕೂರು ಜಿಲ್ಲಾಧಿಕಾರಿ- ಡಾ. ಸಿ ಸೋಮಶೇಖರ್
ಚಿಂತನಾ ಕೂಟಕ್ಕೆ ಶುಲ್ಕವೇನಾದರೂ ನಿಗದಿ ಪಡಿಸಲಾಗಿದೆಯೆ?
ಹೌದು, ಎರಡು ದಿನದ ಮೂರು ಊಟ (ಸರಳವಾದ ಊಟ), ಒಂದು ಬೆಳಗಿನ ಫಲಾಹಾರ, ಆರು ವೇಳೆಯ ಕಾಫಿ, ಸ್ಥಳಾವಕಾಶ ಇತ್ಯಾದಿ ಸೌಲಭ್ಯಗಳ ಸ್ಥಳಾವಕಾಶ, ಕಾರ್ಯಕ್ರಮದ ಆಯೋಜನೆಗೆ ಬೇಕಾದ ಸಂಪನ್ಮೂಲವನ್ನು ಶುಲ್ಕವಿಲ್ಲದೆ ಭರಿಸಲು ಸದ್ಯದ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ. ಆದುದರಿಂದ ಇನ್ನೂರು ರೂಗಳನ್ನು ಶುಲ್ಕವೆಂದು ನಿಗದಿ ಪಡಿಸಲಾಗಿದೆ. ಇದರ ಹಿಂದೆ ಯಾವುದೇ ಲಾಭದ ಉದ್ದೇಶವಿಲ್ಲ.
ದೇವರಾಯನದುರ್ಗವನ್ನು ಎಂದು ತಲುಪಬೇಕು? ಕಾರ್ಯಕ್ರಮ ಮುಗಿಯುವುದು ಯಾವಾಗ?
ದಿನಾಂಕ 22 ರಂದು ಬೆಳಿಗ್ಗೆ 9.00 ರಿಂದ 10.00 ಗಂಟೆಯೊಳಗೆ ತಲುಪಬೇಕು. ಕಾರ್ಯಕ್ರಮ 10.30 ಕ್ಕೆ ಪ್ರಾರಂಭವಾಗುತ್ತದೆ. ಭಾನುವಾರ, ಅಂದರೆ ನವೆಂಬರ್ 23 ರ ಸಂಜೆ 5 ಗಂಟೆಗೆ ಕಾರ್ಯಕ್ರಮ ಮುಗಿಯುತ್ತದೆ.
ತಲುಪಲು ಬೇಕಾದ ವಿವರಗಳು?
ಸ್ವಂತ ವಾಹನದಲ್ಲಿ ಬರುವಿರಾದರೆ ತಲುಪಬೇಕಾದ ಮಾರ್ಗಸೂಚಿ:
ತುಮಕೂರಿನ ಕ್ಯಾತ್ಸಂದ್ರ ತಲುಪಿದ ನಂತರ ಬಲಗಡೆ ತಿರುಗಿ ಸಿದ್ಧಗಂಗಾ ಮಠ-ಮಾರನಾಯಕನಪಾಳ್ಯ-ಊರ್ಡಿಗೆರೆ ರಸ್ತೆ-ನಾಮದ ಚಿಲುಮೆ-ದೇವರಾಯನದುರ್ಗ ಮಾರ್ಗ. ಸ್ಥಳೀಯರನ್ನು ವಿಚಾರಿಸುತ್ತಾ ಬರಬೇಕು ಎಂಬುದನ್ನು ಬೇರೆ ಹೇಳಬೇಕಾಗಿಲ್ಲ.
ಬಸ್ಸಿನಲ್ಲಿ ಬರುವವರಿಗೆ ಮಾರ್ಗಸೂಚಿ:
ತುಮಕೂರನ್ನು ತಲುಪಿದನಂತರ, ಅರ್ಧಗಂಟೆಗೊಮ್ಮೆ ತುಮಕೂರಿನಿಂದ ಇರುವ ಖಾಸಗಿ ಬಸ್ಸು ಹಿಡಿದು ಊರ್ಡಿಗೆರೆ ತಲುಪಬೇಕು. ಅಲ್ಲಿಂದ ಆಟೋಗಳಲ್ಲಿ ದೇವರಾಯನದುರ್ಗ ತಲುಪಬಹುದು. ಬೆಂಗಳೂರಿನಿಂದ ಹೊರಡುವವರು, ಬೆಳಿಗ್ಗೆ ಆರು ಗಂಟೆ ಅಥವ ಅದಕ್ಕೆ ಮುನ್ನವೇ ಕೆಂಪೇಗೌಡ ಬಸ್ ನಿಲ್ದಾಣ ತಲುಪಿ ತುಮಕೂರಿಗೆ ಹೊರಡುವ ಬಸ್ಗಳನ್ನು ಹಿಡಿದರೆ ಮಾತ್ರ ಸಮಯಕ್ಕೆ ಸರಿಯಾಗಿ ದೇವರಾಯನದುರ್ಗ ತಲುಪಿಕೊಳ್ಳಬಹುದು.
ಬೆಂಗಳೂರಿನಿಂದ ತುಮಕೂರಿಗೆ ಖಾಸಗಿ ಬಸ್ಸುಗಳಾದರೆ 30 ರೂಪಾಯಿಗಳು ದರ. ಕೆ ಎಸ್ ಆರ್ ಟಿ ಸಿ ಯಾದರೆ ೪೨ ರೂಪಾಯಿಗಳು. ತುಮಕೂರಿನಿಂದ ಊರ್ಡಿಗೆರೆಗೆ 15 ರೂಪಾಯಿಗಳು. ನಾಲ್ಕೈದು ಜನರನ್ನು ತುಂಬಿಕೊಂಡು ಹೋಗುವ ಆಟೋಗಳಲ್ಲಿ ದುರ್ಗವನ್ನು ತಲುಪಬಹುದು: 10-ರಿಂದ 15 ರೂಗಳನ್ನು ಪ್ರತಿಯೊಬ್ಬರಿಗೆ ತೆಗೆದುಕೊಳ್ಳುತ್ತಾರೆ.
ಬೆಂಗಳೂರಿನಿಂದ ಹೊರಡುವವರು
ಬೆಳಿಗ್ಗೆ ನೀವು ಕನಿಷ್ಠ ಪಕ್ಷ ಆರು ಗಂಟೆಗಾದರೂ ಮನೆಯನ್ನು ಬಿಡಬೇಕಾಗುತ್ತದೆ. ತುಮಕೂರಿಗೆ 2.30 ರಿಂದ 3.00 ಗಂಟೆ ಕಾಲದ ಪ್ರಯಾಣ, ಅಲ್ಲಿಂದ ಊರ್ಡಿಗೆರೆಗೆ ಅರ್ಧ ಗಂಟೆ ಪ್ರಯಾಣ, ವಿಶ್ರಾಂತಿ ಎಲ್ಲವೂ ಸೇರಿದರೆ ಸುಮಾರು 10.00 ಗಂಟೆಗೆ ನೀವು ತಲುಪಬಲ್ಲಿರಿ.
ಹವಾಮಾನ: ಮೋಡ ಕವಿದಿರುತ್ತದೆ. ರಾತ್ರಿಯಾದರೆ ಹೆಚ್ಚು ಚಳಿ ಇರುತ್ತದೆ. ಆದುದರಿಂದ ಸ್ವೆಟರ್, ಶಾಲುಗಳು ನಿಮ್ಮೊಡನಿರಲಿ. ಜೊತೆಗೆ-ಟಾರ್ಚು ಇರುವುದು ಸೂಕ್ತ. (ವಿದ್ಯುತ್ ಸರಬರಾಜನ್ನು ನಂಬುವ ಹಾಗಿಲ್ಲ.)
ವ್ಯವಸ್ಥೆ: ದೇವರಾಯನದುರ್ಗ ಆಧುನಿಕ ವ್ಯವಸ್ಥೆಯಿಂದ ಕೂಡಿರುವ ಸ್ಥಳವಲ್ಲ. ಆದುದರಿಂದ ಅಲ್ಲಿ ದೊರಕಿರುವ ಸ್ಥಳಾವಕಾಶಕ್ಕೆ ತಕ್ಕಂತೆ ಮಲಗಲು ಡಾರ್ಮಿಟರಿ ವ್ಯವಸ್ಥೆ ಮಾಡಲಾಗಿದೆ. ಹಾಸಿಗೆ ಅಥವ ಜಮುಖಾನ, ಉಣ್ಣೆ ರಗ್ಗಿನೊಂದಿಗೆ ಸರಬರಾಜಿನ ಆಶಯವಂತೂ ಇದೆ. ಮಹಿಳೆಯರಿಗೆ -ಪುರುಷರಿಗೆ ಪ್ರತ್ಯೇಕವಾದ ವ್ಯವಸ್ಥೆ ಎಂದೆನ್ನುವುದನ್ನು ವಿವರಿಸಬೇಕಿಲ್ಲ.
ಕಾರ್ಯಕ್ರಮದ ಉಳಿದ ವಿಶೇಷಗಳೇನು?
ಅನಂತಮೂರ್ತಿಯವರ ನೀಳ್ಗತೆಯಾದ ಘಟಶ್ರಾದ್ಧ ತೆರೆಯ ಮೇಲೆ ಅತ್ಯಂತ ಸೃಜನಶೀಲವಾಗಿ ಗಿರೀಶ್ ಕಾಸರವಳ್ಲಿಅಯವರು ಮೂಡಿಸಿದ್ದಾರೆ. ಇವೆರಡೂ ಭಾರತದ ಅಪರೂಪದ ಸೃಜನ್ಶೀಲ ಅಭಿವ್ಯಕ್ತಿಯೆ. ಇವೆರಡಕ್ಕೂ ಗೌರವ ಸೂಚನೆಯಾಗಿ ಯುವ ಕಲಾವಿದ ಪಿ ಟಿ ಪ್ರಮೋಡ್ ಹಾಗು ಶಿವಾರಾಜ್ರವರು ಕಲಾಕೃತಿಗಳನ್ನು ರಚಿಸಿದ್ದಾರೆ. ಅದರ ಪ್ರದರ್ಶನವೂ ಇದೆ. ನೀಳ್ಗತೆ-ಚಲನಚಿತ್ರಕ್ಕೆ ಕಲಾಮಾಧ್ಯಮದಿಂದ ಗೌರವಿಸಲು ಹೊರಡುತ್ತಿರುವುದು ಬಹುಶಃ ಅಪರೂಪದ ಸಂಗತಿಯೆ. ಇದಕ್ಕಾಗಿ ಸಂವಾದ.ಕಾಂ ಇಬ್ಬರೂ ಕಲಾವಿದರಿಗೆ ಅಭಾರಿಯಾಗಿದೆ.
ಕಲಾವಿದರ ಸಂಕ್ಷಿಪ್ತ ಪರಿಚಯ?
ಪಿ ಟಿ ಪ್ರಮೋದ್
ಮೂಲತಹಃ ಇಂಜಿನಿಯರಿಂಗ್ ಪದವಿಧರರಾದರೂ, ಪ್ರೌಢಶಾಲೆಯಿಂದಲೆ ಕಲೆಯನ್ನು ವ್ಯಾಸಂಗದ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡು, ‘ಕಲೆ’ಯನ್ನು ಕ್ರಮಬದ್ಧವಾಗಿ ಕಲಿತಿರುವ ಪ್ರಮೋದ್ ಯುನಿಗ್ರಾಫಿಕ್ಸ್ ಬಳಸಿ ಡಿಸೈನಿಂಗ್ ಮಾಡುವ ವೃತ್ತಿಯಲ್ಲಿ ನಿಷ್ಣಾತರು. ‘ಕಾನೀನ’ ಎಂದೆನ್ನುವ ವಿಷಯವನ್ನು ತಮ್ಮ ಕಲೆಯ ಕೇಂದ್ರವಸ್ತುವನ್ನಾಗಿ ಆಯ್ಕೆ ಮಾಡಿಕೊಂಡು, ಪೈಂಟಿಂಗ್ಗಳನ್ನು ರಚಿಸಿ ಕರ್ನಾಟಕ ಚಿತ್ರಕಲಾ ಪರಿಷತ್, ಪೈಂಟ್ ಬಾಕ್ಸ್ ಆರ್ಟ್ ಗ್ಯಾಲರಿಯಲ್ಲಿ ಪ್ರದರ್ಶಿಸಿದ್ದರು. ವಿಕ್ರಾಂತ ಕರ್ನಾಟಕದಲ್ಲಿ ‘ಇಲಸ್ಟ್ರೇಟರ್’ ಆಗಿಯೂ ಕೆಲಸ ಮಾಡಿದ್ದಾರೆ. ಕನ್ನಡಸಾಹಿತ್ಯ.ಕಾಂ ಪ್ರಕಟಣ ವಿಭಾಗವಾದ ‘ಸಲ್ಲಾಪ’ ಪ್ರಕಟಿಸಿದ ಎರಡು ಕೃತಿಗಳೂ ಸೇರ್ಇದಂತೆ ಅನೇಕ ಕೃತಿಗಳಿಗೆ ಚಿತ್ರಗಳನ್ನು ರಚಿಸಿದ್ದಾರೆ. ಇವರ ಬ್ಲಾಗ್: www.kuncha-prapancha.blogspot.com
ಶಿವರಾಜ್ ಕೆ
ವೃತ್ತಿಯಲ್ಲಿ ಆರ್ಕಿಟೆಕ್ಟ್ ಆಗಿರುವ ಶಿವಕುಮಾರ್ ಕರ್ನಾಟಕ ಚಿತ್ರಕಲಾ ಪರಿಷತ್ ಆಯೋಜಿಸಿದ್ದ ಚಿತ್ರಸಂತೆಯಲ್ಲಿ ಪಾಲ್ಗೊಂಡಿದ್ದರಲ್ಲದೆ, ಧ್ವನ್ಯಾಲೋಕದಲ್ಲಿ, ಸಾವನದುರ್ಗ ಪ್ರಿಂಟಿಂಗ್ ಕ್ಯಾಂಪ್ಗಳಲ್ಲಿ ನಡೆದ ಶಿಬಿರದಲ್ಲಿಯೂ ಕಾರ್ಯನಿರ್ವಹಿಸಿದವರು. ಪೈಂಟ್ ಬಾಕ್ಸ್ ಆರ್ಟ್ ಗ್ಯಾಲರಿಯಲ್ಲಿ ಇವರ ಕಲಾಕೃತಿಗಳು ಪ್ರದರ್ಶನಗೊಂಡಿವೆ. ಇವರ ಬ್ಲಾಗ್: www.shivu-adhamya.blogspot.com
ಈ ಕಾರ್ಯಕ್ರಮದಿಂದ ಏನನ್ನು ನಿರೀಕ್ಷಿಸಬಹುದು? ನಿರೀಕ್ಷಿಸಬಾರದು?
ದೇಶದ ಅತ್ಯುತ್ತಮ ಸೃಜನಶೀಲ ಸಿನಿ ನಿರ್ದೇಶಕನಿಗೆ ಗೌರವ ತೋರಿದ ಸಮಾಧಾನ, ತೃಪ್ತಿ. ಕುತೂಹಲ, ಗಂಭೀರ ಆಸಕ್ತಿ ಉಳ್ಳವರಿಗೆ-ಸಿನಿಮಾ ಬಗೆಗೆ ನಮಗಿರಬಹುದಾದ ಧೋರಣೆಗಳಲ್ಲಿ ಸಕಾರಾತ್ಮಕವಾದ ಅಲ್ಪಸ್ವಲ್ಪ ಬದಲಾವಣೆ. ಮುಂದೆ ಸಿನಿಮಾ ನೋಡಿದಾಗ ನೆನಪನ್ನು ಕಾಡಬಹುದಾದ ದಿಕ್ಸೂಚಿ. ಹೌದಲ್ಲ ಇಲ್ಲಿಯವರೆಗೂ, ನಾನು ಹೀಗೇಕೆ ಯೋಚಿಸಿರಲಿಲ್ಲವೆಂದೆನ್ನ ಬಹುದಾದ ಬೆರಗು. ಆಸಕ್ತಿ, ಗಾಂಭೀರ್ಯ ಇಲ್ಲದವರಿಗೆ, ಸ್ನೇಹಿತರ ಒತ್ತಡದಿಂದ ಭಾಗವಹಿಸುವವರಿಗೆ ಯಾವುದೇ ತೆರ್ನಾದ ಲಾಭವಿರುವುದಿಲ್ಲ, ದೇವರಾಯನದುರ್ಗ ನೋಡಿಲ್ಲದವರಿಗೆ ಅದನ್ನು ನೋಡಿದ ಸಂತೃಪ್ತಿ, ಬೆಟ್ಟದ ಬುಡದಲ್ಲಿ, ತುದಿಯಲ್ಲಿ ನವೆಂಬರ್ ಚಳಿಯಬಗೆಗೆ ಕುತೂಹಲ ಉಳ್ಳವರಿಗೆ ಒಂದು ರಾತ್ರಿಯ ಚಳಿ ಅನುಭವ. ಹೆಚ್ಚೆಂದರೆ ಒಂದಷ್ಟು ನೆಗಡಿ, ಮೂಗುರಿತ...
ನಾವು ಏನನ್ನಾದರೂ ಮಾಡಬಹುದೆ?
ಖಂಡಿತವಾಗಿ. ನಿಮ್ಮ ಬಳಿ ಕೆಮೆರಾ ಇದ್ದರೆ, ಕಾರ್ಯಕ್ರ್ಮದ ಫೋಟೋಗಳನ್ನು ಕ್ಲಿಕ್ಕಿಸಿದರೆ ಕಳುಹಿಸಿಕೊಡಿ. ಹ್ಯಾಂಡಿ ಕ್ಯಾಮ್ ಮುಂತಾದವಿದ್ದರೆ, ಈಕಾರ್ಯಕ್ರಮದ ಬಗೆಗೆ ಪ್ರೇಕ್ಷಕರ ಪ್ರತಿಕ್ರಿಯೆ ದಾಖಲಿಸಿಕೊಡಿ. ಸಮಯವಿದ್ದರೆ, ಗಿರೀಶ್ರೊಂದಿಗೆ ಆಗಬಹುದಾದ ಸಂವಾದವನ್ನು ಬೇರೆ ಬೇರೆ ಕೋನಗಳಲ್ಲಿ (ಪ್ರೇಕ್ಷಕರಿಗೆ ಅಡಚಣೆಯಾಗದಂತೆ) ಚಿತ್ರೀಕರಿಸಿ. ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿ.ಆಗಬಹುದಾದ ಸಣ್ಣಪುಟ್ಟ ಓರೆಕೋರೆಗಳನ್ನು ಹೆಚ್ಚಿಗೆ ಮನಸ್ಸಿಗೆ ತೆಗೆದುಕೊಳ್ಳದಿರುವ ಔದಾರ್ಯವನ್ನು ತೋರಿಸಿ. ಏಕೆಂದರೆ ಕರ್ಯಕ್ರಮ ಆಗುತ್ತಿರುವುದು ಈಗಾಗಲೇ ತಿಳಿಸಿರುವಂತೆ ಹೆಚ್ಚಿನ ಸೌಲಭ್ಯಗಳಿಲ್ಲದ, ದೇವರಾಯನದುರ್ಗದಲ್ಲಿ.
ಮತ್ತೂ ಒಂದು ಉಲ್ಲೇಖನೀಯ ವಿಶೇಷ :
ಈ ಹಿಂದೆ ಗುರುಪ್ರಸಾದ್ರ ‘ಮಠ’ ಚಿತ್ರದ ಪ್ರದರ್ಶನ ಮತ್ತು ಚಿತ್ರತಂಡದೊಂದಿಗೆ ಸಂವಾದವನ್ನು ಏರ್ಪಡಿಸಲಾಗಿತ್ತು. ಆ ಸಂದರ್ಭದಲ್ಲಿ ‘ಮಥ’ ಚಿತ್ರದ ವಿಮರ್ಶೆ ಸ್ಪರ್ಧೆಯನ್ನೂ ಆಯೋಜಿಸಲಾಗಿತ್ತು. ಶಿವಮೊಗ್ಗದ ಅವಿನಾಶ್ ಹಾಗು ಟೀನಾ ಶಶಿಕಾಂತ್ರವರ ವಿಮರ್ಶೆಗಳಿಗೆ ಬಹುಮಾನ ಘೋಷಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಅವರಿಗೆ ಬಹುಮಾನದ ವಿತರಣೆಯೂ ಇರುತ್ತದೆ.
ಎರಡೂ ದಿನಗಳ ಕಾರ್ಯಕ್ರದಲ್ಲಿ ಕೆಳಕಂಡ ಮಹನೀಯರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುತ್ತಾರೆ.
ಗಿರೀಶ್ ಕಾಸರವಳ್ಳಿ, ಹಿರಿಯ ನಿರ್ದೇಶಕರು
ಚ ಹ ರಘುನಾಥ್, ಪ್ರಜಾವಾಣಿ ಸಿನಿ ಪತ್ರಕರ್ತರು,
ಡೇವಿಡ್ ಬಾಂಡ್, ಕುವೆಂಪು ವಿಶ್ವವಿದ್ಯಾಲಯ(ಕನ್ನಡ ಮತ್ತು ಫ್ರೆಂಚ್ ಸಿನಿಮಾ ಕುರಿತು ವಿಶೇಷ ಅನುಭವಿ)
ಡಾ| ದತ್ತಾತ್ರೆಯ, ವಿಶೇಷ ಸಮಾಲೋಚಕರು
ಡಾ| ತಾರಕೇಶ್ವರ್, ಹಂಪಿ ಕನ್ನಡ ವಿಶ್ವ ವಿದ್ಯಾಲಯ
ಸಾವಿತ್ರಿ, ಸ್ಥಾನಿಕ ಸಂಪಾದಕಿ, ಸಂಯುಕ್ತ ಕರ್ನಾಟಕ
ಕುಲಪತಿಗಳು, ತುಮಕೂರು ವಿಶ್ವವಿದ್ಯಾಲಯ
ಡಾ| ಸಿ ಸೋಮಶೇಖರ್, ಜಿಲ್ಲಾಧಿಕಾರಿಗಳು, ತುಮಕೂರು
ಮಮತಾ ಜಿ ಸಾಗರ್, ಕವಯತ್ರಿ
ಎರಡು ದಿನಗಳ ಕಾರ್ಯಕ್ರಮಕ್ಕೆ ಭಾಗವಹಿಸುವವರಿಗೆ ಊಟ ಮತ್ತು ವಸತಿ ವ್ಯವಸ್ಥೆ ಇರುತ್ತದೆ. ಪ್ರವೇಶ ವಿಶೇಷ ಪಾಸ್ ಹೊಂದಿರುವವರಿಗೆ ಮಾತ್ರ. ಆಸಕ್ತರು ಕೆಳಗೆ ಕೊಟ್ಟಿರುವ ಮೊಬೈಲ್ ಸಂಖ್ಯೆಗಳಿಗೆ ಸಂಪರ್ಕಿಸಿ 200/- ರೂಪಾಯಿ ಸಂದಾಯ ಮಾಡಿ ವಿಶೇಷ ಪಾಸ್ ಪಡೆಯಬಹುದು. ಸ್ಥಳ ಮತ್ತು ಸಂಪರ್ಕ ಈ ಕೆಳಕಂಡಂತಿದೆ:
ನೊಂದಾವಣೆಯ ಪಾಸ್ ಬೇಕಾದವರು ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆಗಳು:
ಬೆಂಗಳೂರಿನ ಆಸಕ್ತರಿಗೆ:
- ಕಿರಣ್ ಎಮ್ - 97317 55966 (ಪದ್ಮನಾಭನಗರ)
- ರಾಘವ ಕೋಟೆಕರ್ - 99013 99671 (ಜೆ ಪಿ ನಗರ, ಜಯನಗರ, ಬನಶಂಕರಿ)
- ಅರೆಹಳ್ಳಿ ರವಿ 99004 39930 (ಬಿ ಟಿ ಎಂ ಲೇಔಟ್, ಹೊಸೂರು ರಸ್ತೆ)
- ರುದ್ರಮೂರ್ತಿ: 94804 94135(ಮಲ್ಲೇಶ್ವರ, ಯಶವಂತಪುರ, ರಾಜಾಜಿನಗರ, ನೆಲಮಂಗಲ)
- ಪ್ರಮೋದ್: 94487 01470 (ಬಸವನಗುಡಿ)
- ಸತೀಶ್ ಗೌಡ (ಅವಿರತ ಬಳಗದ ಸದಸ್ಯರಿಗಾಗಿ) - 98800 86300
- ವಸಂತ್ (ಶಿವು ಅಡ್ಡಾ ಬಳಗಕ್ಕಾಗಿ) - 97390 20070
- ರಾಜಕುಮಾರ್ (ಸಮಾಜ ಸೇವಕರ ಸಮಿತಿ) - 94481 71069
ತುಮಕೂರಿನ ಆಸಕ್ತರಿಗೆ:
ಕೋಟೆ ನಾಗಭೂಷಣ್, ಪ್ರಜಾಪ್ರಗತಿ ದಿನಪತ್ರಿಕೆ - 98800 18381
ಮೈಸೂರಿನ ಆಸಕ್ತರಿಗೆ:
ಲಾವಣ್ಯ ಪಿ ಜಿ - 94480 06546
ಶಿವಮೊಗ್ಗ ಮತ್ತು ಸುತ್ತಮುತ್ತಲಿನ ಆಸಕ್ತರಿಗೆ:
ಅವಿನಾಶ್ - 94801 38034
ಹಾಸನದ ಆಸಕ್ತರಿಗೆ:
ಪ್ರಭಾಕರ್- - 94483 65816
ಚಿತ್ರದುರ್ಗದ ಆಸಕ್ತರಿಗೆ:
ಮೇಘ ಗಂಗಾಧರ್ - 98800 18384
ದಾವಣಗೆರೆ ವಲಯದ ಆಸಕ್ತರಿಗೆ:
ಚನ್ನವೀರಪ್ಪ- 98800 18385
ಬಾಗಲಕೋಟೆ ಆಸಕ್ತರಿಗೆ:
ರಾಮ್ ಮನಗೂಳಿ - 98802 95894






